ಯುವ ಪೀಳಿಗೆ ಮತ್ತು ಗಾಂಧಿ
ಯುವ ಪೀಳಿಗೆ ಮತ್ತು ಗಾಂಧಿ ಮೊನ್ನೆ ನಾನು ಫೇಸ್ಬುಕ್ ನೊಡುವಾಗ ಗಾಂಧೀಜಿಯವರ ಬಗ್ಗೆ ಒಂದು ಪೋಸ್ಟ್ ನೋಡ್ದೆ, ಅದರ ಪ್ರಕಾರ “ಗಾಂಧಿ ಒಬ್ಬ ವಿಕೃತ ಕಾಮಿ, ದುರಾಳ ಮನಸಿನ ವ್ಯಕ್ತಿ” ಅದನ್ನ ನೋಡಿ ಒಂದು ಕ್ಷಣ ನನ್ನ ಧಮನಿ ನಿಂತ ಅನುಭವ!!! ಮೊದಲಿನಿಂದಲೂ ಗಾಂಧೀಜಿಯವರ ಕಟ್ಟ ಅಭಿಮಾನಿ ನಾನು, ಅವರ ಅಘಾದವಾದ ವ್ಯಕ್ತಿತ್ವದಲ್ಲಿ ಒಂದು ಸೂಜಿಯಶ್ಟಾದರು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂಬ ಆಸೆ ನನದು. ಹೀಗಿರುವಾಗ ಇಂಥ ಒಂದು ಪೋಸ್ಟ್ ನೋಡಿ ಇದರ ಬಗ್ಗೆ ನನ್ನ ಸ್ನೇಹಿತರನ್ನು ಕೇಳ ಹೊದ್ರೆ ಅವರದು ಅಷ್ಟೇ ನಿಷ್ಟೋರವಾದ ಉತ್ತರ! ಅವರ ಪ್ರಕಾರ ನಮ್ಮ ದೇಶದ ಈಗಿನ ಸ್ಥಿತಿಗೆ ಗಾಂಧೀಜಿಯವರೇ ಕಾರಣ!! ಈಗಿನ ಯುವ ಪೀಳಿಗೆ ಸೊಷಿಯಲ್ ಮೀಡಿಯದಲ್ಲಿ ಯಾರದ್ದಾದರು ಬಗ್ಗೆ ಪೋಸ್ಟ್ ಮಾಡುವ ಮೊದಲು ಅದು ನಿಜವೂ ಸುಳ್ಳೂ ಎಂದು ಕಿಂಚಿತ್ತು ಯೋಚಿಸದೇ ಪೋಸ್ಟ್ ಬಟನ್ ಒತ್ತಿಬಿಡಿತ್ತಾರೆ. ನಾನು ಯಾರ ಯೋಚನಾ ಶಕ್ತಿಯನ್ನು ಇಲ್ಲಿ ಪ್ರಶ್ನಿಸುತ್ತಿಲ್ಲ, ನನ್ನ ಕಳಕಳಿಯ ಮನವಿ ಏನೆಂದರೆ ನೀವು ತಪ್ಪಾಗಿ ಪ್ರಚಾರ ಮಾಡುತ್ತಿರುವುದು ನಮ್ಮ “ಮಹಾತ್ಮ”ನ ಮೇಲೆ ಎಂಬುದು ನೆನಪಿರಲಿ. ಜನರಲ್ಲಿ ನಾನು ಸಂವಹಿಸುವಾಗ ಅವರು ಗಾಂಧಿಯನ್ನು ದ್ವೇಷಿಸಲು ಕೆಲವು ಕಾರಣಗಳು ತಿಳಿದವು. ಅದಕ್ಕೆ ನನಗೆ ತಿಳಿದ ಉತ್ತರಗಳನ್ನು ನಿಮ್ಮ ಮುಂದಿಡುವ ಒಂದು ಪ್ರಾಮಾಣಿಕ ಪ್ರಯತ್ನ ಇದು. ದೇಶದ ಇಬ್ಬಾಗ ಮತ್ತು ಗಾಂಧಿ: ನಮ್ಮ ಯುವ ಪೀಳಿಗೆಯು ಗಾಂಧಿಯನ್ನು ದ್ವೇಷಿಸಲು ಪ್ರಮುಖ ಕಾರಣ